ಮನದಿ ತುಟಿಗಚ್ಚಿ ಹಿಡಿದಿರುವ ನೋವ
ಬಾರದೆ ಅಡಗಿರುವ ಮಾತುಗಳ ಭಾವ
ಬರದ ಮಾತನು ಪದಗಳಲಿ ಪೊನಿಸಿದ ಕಾವ್ಯ
ಸೇರಿಸಿದರೆ ಕವನಕೊಂದು ರಾಗದ ಜೀವ
ಸುರದಿ ಆಗುವುದು ಸುಂದರ ಭಾವಗೀತೆ
ಕೇಳಿದರೆ ಆ ಗೀತೆ ಮಿಡಿಯುವುದು ಹೃದಯ
ಮುಸ್ಸಂಜೆಯ ತಂಪಲ್ಲಿ ಮಿಂದಂತೆ ಬೆಂದ ಜೀವ
ತುಂತುರಿನ ತಂಗಾಳಿಯಲಿ ತೆಲಿಹೊದಂತೆ ಮನದ ನೋವ
ಚಿಂತಿಸದಿರು ಮತ್ತೆ ಮರುಕಳಿಸಿದರೆ ನೋವ
ಮತ್ತೆ ನೇಸರನು ಚೆಲ್ಲತಾನ ಮುಂಜಾವ
ಎಲ್ಲೆಲ್ಲೂ ಹಸಿರಾಗಿ ಚಿಗಿರ್ತಾವ ಮಾವ
ಸುತ್ತ ಪರಿಸರದಿ ಅರಳುತಾವ ಹೂವ
ಎತ್ತೆಲೆತ್ತಲೂ ಪಸರಿಸುತ್ತಾವ ಲವಲವಿಕೆಯ ಛಾಯೆ
ಮತ್ತೆಕೆ ಬೇಸರ ಜೀವವೆ?
ಮತ್ತೆ ನೇಸರನು ಬರುತಾನ ಕಳಿಯೊಕೆ ನೋವ
ಮನವೆ, ತುಟಿಗಚ್ಚಿ ಹಿಡಿಯದಿರು ನೋವ..
ಬಾರದೆ ಅಡಗಿರುವ ಮಾತುಗಳ ಭಾವ
ಬರದ ಮಾತನು ಪದಗಳಲಿ ಪೊನಿಸಿದ ಕಾವ್ಯ
ಸೇರಿಸಿದರೆ ಕವನಕೊಂದು ರಾಗದ ಜೀವ
ಸುರದಿ ಆಗುವುದು ಸುಂದರ ಭಾವಗೀತೆ
ಕೇಳಿದರೆ ಆ ಗೀತೆ ಮಿಡಿಯುವುದು ಹೃದಯ
ಮುಸ್ಸಂಜೆಯ ತಂಪಲ್ಲಿ ಮಿಂದಂತೆ ಬೆಂದ ಜೀವ
ತುಂತುರಿನ ತಂಗಾಳಿಯಲಿ ತೆಲಿಹೊದಂತೆ ಮನದ ನೋವ
ಚಿಂತಿಸದಿರು ಮತ್ತೆ ಮರುಕಳಿಸಿದರೆ ನೋವ
ಮತ್ತೆ ನೇಸರನು ಚೆಲ್ಲತಾನ ಮುಂಜಾವ
ಎಲ್ಲೆಲ್ಲೂ ಹಸಿರಾಗಿ ಚಿಗಿರ್ತಾವ ಮಾವ
ಸುತ್ತ ಪರಿಸರದಿ ಅರಳುತಾವ ಹೂವ
ಎತ್ತೆಲೆತ್ತಲೂ ಪಸರಿಸುತ್ತಾವ ಲವಲವಿಕೆಯ ಛಾಯೆ
ಮತ್ತೆಕೆ ಬೇಸರ ಜೀವವೆ?
ಮತ್ತೆ ನೇಸರನು ಬರುತಾನ ಕಳಿಯೊಕೆ ನೋವ
ಮನವೆ, ತುಟಿಗಚ್ಚಿ ಹಿಡಿಯದಿರು ನೋವ..
No comments:
Post a Comment