Sunday, November 28, 2010

ಶ೦ಖದಿ೦ದ ಬಂದ್ರನ ತೀರ್ಥ..

ಮಾತಾಡಿದರ ಮುತ್ತಿನಂಗ ಇರಬೇಕು
ಮಾತಾಡಿದರ ಸಲಾಕಿಹಂಗ ಇರಬೇಕು
ಹಂಗ ಮಾತಾಡಬೇಕು ಹಿಂಗ ಮಾತಾಡಬೇಕು
ಅಂತ ಬಸವಣ್ಣ ಹೇಳಿದ್ದನ್ನು
ಮಸ್ತಾರ್ ಸಾಲ್ಯಾಗ ಕಲಿಸಿದ್ರು...


ಮಾತಾಡಿದರ ಅರ್ಥ ಇರಬೇಕು
ಪ್ರತಿ ಶಬ್ದದಾಗ ತೂಕ ಇರಬೇಕು
ಮನಸನೆ೦ದು ಮಾತನ್ಯಾಗ ಇರಬೇಕು
ಮಾತನೆ೦ದು ಮನಸ್ನ್ಯಾಗ ಇರಬೇಕು
ಅಂತ ನಮ್ಮಮ್ಮ ಹೇಳಿದ್ದಳು


ಯಾರು ಹೇಳಿದ್ದು ಎಷ್ಟು ತೆಲ್ಯಾಗ ಹೊಕ್ಕಿರ್ಲಿಲ್ಲ
ಇವತ್ತ ನನ್ನಾಕಿಗೆ ಏನೋ ಅಂದ್ಯಾ,
ಆಕಿ ಏನ ತಿಳಕೊ೦ಡ್ಳು
ಆವಾಗ ನಮ್ಮಮ್ಮ ನಮ್ಮ ಮಾಸ್ತರ
ಹೇಳಿದ್ದು ನೆನಪಿಗೆ ಬಂದಿತ್ತು ...

"ಅದಕ್ಕ ಅನ್ನುದು ಶ೦ಖದಿ೦ದ ಬಂದ್ರನ ತೀರ್ಥ ಅಂತ ...."
ಎಲ್ಲಿ೦ದ ಬೇಕು ಅಲ್ಲಿ೦ದ ಬ೦ದ್ರ ಲಗೂನ ತಿಳದ ತಿಳಿತೈತಿ .."

Saturday, November 20, 2010

ಬಚ್ಚಿಟ್ಟ ಬುತ್ತಿ ..

ನಾ ಕೊಟ್ಟ ಗೆಜ್ಜೆ ಕಟಗೊ೦ಡು
ಲಜ್ಜೆಯಿ೦ದ ನಾಚಗೊ೦ಡು
ಹೆಜ್ಜಿ ಮ್ಯಾಲ ಹೆಜ್ಜಿ ಹಕ್ಕೊ೦ಡು
ನೆಡೆವ ಅವಳನ್ನು,
ಅವಳ ತು೦ಟ ನಗೆಯನ್ನು,
ಹೊಳೆವ ಕ೦ಗಳನ್ನು
ನನ್ನ ಕಣ್ಣ ರೆಪ್ಪೆಯಲಿ ಸೆರೆ ಹಿಡಿದು
ಎದೆಯ ಗೂಡಲಿ ಬಚ್ಚಿಟ್ಟು
ಅವಳ ನೆನಪಾದಗೊಮ್ಮೆ
ಬಚ್ಚಿಟ್ಟ ಬುತ್ತಿಯ ಬಿಚ್ಚಿ
ತಿನ್ನುವ ಬಾಗ್ಯ ನನ್ನದಿರಲಿ !!