Tuesday, April 14, 2020

ನಿನ್ನ ವಿಶಾಲವಾದ ನಯನದಿ ಆಸೆಯ ಆಣೆಕಟ್ಟು ಕಟ್ಟಲೆ
ನಿನ್ನ ಕಿರುನಗಯೇ ತುದಿಯಲ್ಲಿ ಕನಸುಗಳ ಅಂತಃಪುರ ಕಟ್ಟಲೆ

Ninnee kirunageya tudiyalli kanasugaLa antapurav kattale..
Ninnee mugunattina honala beLakinali beLadingaLa okuLi aadalae..
Aha ninna saundaryakinta najooku hecchu
Ninna Andakkinta chenda hechu
Elladakinta namma samskritya sobagu hecchu..
Ninna achaarakinta vichaar chenda
Ninna haadiginta adara bhava chenda

ಹೊತ್ತಿಗೂ ಗೊತ್ತಾಗಂತೆ



ಜೀವನ  ನೋವು ನಲುವಿನ ಹಂದರ
ನಡುವೆ ಕನಸುಗಳ ಗೋಪುರ
 ಸೇತುವೆ ಕಟ್ಟುವ ಅತುರ

ನನ್ನ ತೋಳಲ್ಲಿ ತಲೆಯಿಟ್ಟು  ಮಲಗಿ
ಒಮ್ಮೆ ನಿನ್ನೆಯ ನೆನಪಿನ ದೋಣಿಯಲಿ ತೇಲುತ
ಮತ್ತೂಮ್ಮೆ ನಾಳೆಯ ಕನಸಿನ ಇಟ್ಟಿಗೆ ಜೋಡಿಸುತ

ಮರಳಿನ ಗಡಿಯಾರ ಮಲಗಿಸಿ ನಿಲ್ಲಿಸಿದಂತೆ
ಹೊತ್ತಿಗೂ ಗೊತ್ತಾಗಂತೆ ಹೊತ್ತು ಹೋಗುವಾಗ,
ನಾವೇ ಪರಪಂಚ, ನಮ್ಮದೇ ಪರಪಂಚ !!

Friday, January 25, 2019

ಗುರುವಾರದ ಗುರುತು


ಗುರುವಾರದ  ಗುರುತು
ಗುರುರಾಯರ ಆಶೀರ್ವಾದ
ನಮ್ಮ ಪ್ರೀತಿಯ ಸಾಕ್ಷಾತ್ಕಾರ
ನನ್ನ ಕೈಗಿಟ್ಟಳು
ಮುದ್ದು ಬಾಲ ಚಂದಿರ

ಚಂದಿರನಂತೆ ಸುಂದರನಿವನು
ಮೊಲದಂತೆ ಮನೆತುಂಬ ಓಡಾಡುವನು
ಮುಗುಳುನಗೆಯಲ್ಲಿ ಜಗವೇ ಗೆಲ್ಲುವನು
ತೊದಲುನುಡಿಯಲ್ಲಿ ಕಥೆಯೇ ಬರೆಯುವನು
ತನ್ನದೇ ಸಂಗೀತದಲ್ಲಿ ತಲ್ಲೀನಿವನು
ತನ್ನ ನಾಟ್ಯಕ್ಕೆ ತಾನೇ ನಗುವನು

ಅವನ ತು೦ಟಾಟಕೆ ಸೋತು, ಸುಸ್ತಾಗಿ
ಯಾವಾಗ ಮಲಗುವನು ಅಂತ ಕಾಯುವುದು
ಅವನು ಮಲಗಿದಾಗ
ಮತ್ತೆ ಯಾವಾಗ ಏಳುವನು ಅಂತ ಕಾಯುವುದು
ಅವನು ಎದ್ದಾಗ
ಮತ್ತೆ ಹಬ್ಬದ ವಾತಾವರಣ

ಕುಂತಲ್ಲೇ ಕೂಡದವನು
ನಿಂತಲ್ಲೇ ನಿಲ್ಲದವನು
ಕಂಡಲ್ಲೆ ಕಾಣದವನು
ಕ್ಷಣದಲ್ಲೇ ನಗುವನು
ಕ್ಷಣದಲ್ಲೇ ಅಳುವನು
ಮನದಲ್ಲೇ ನೆಲಿಸುವನು





Tuesday, March 28, 2017

ತೊಟ್ಟಿಲಾಧಿಪತಿ ಬಂಗಾರಿಗೆ



ತೊಟ್ಟಿಲಾಧಿಪತಿ  ಬಂಗಾರಿಗೆ
ಸರ್ವಾಧಿಕಾರಿ ಸಿಂಗಾರಿಗೆ
ನಿದ್ರಾಲಂಕಾರಿ ಮುಂಗಾರಿಗೆ
ಓಡಲಾಧಿಕಾರಿ ಮಂದಾರಿಗೆ

ಜೋಳಿಗೆಯಲಿ ಮಲಗಿರುವ ಕುಮಾರಂಗೆ
ಜೋ ಜೋ ಜೋಕಾಲಿ ಜೀಕ ಹಾಕುವೆ
ಅರೆ ನಿದ್ರೇಲಿ ಕುಂಯ ಕುಂಯ ಅಂದಾಗೆ
ಸೊ ಸೊ ಸೋಬಾನ ಪದವ ಹಾಡುವೆ

ಅಳುವೇ ಯಾಕೆ ಕಂದ ಕೋಪಾನ
ಅವ್ವ ಕೊಡತಾಳ ನಿಂಗೆ ಊಟಾನ
ಆಜ್ಜಿ ಹಾಡತಾಳ ನಿಂಗೆ ಜೋಗುಳಾನ
ಅಜ್ಜ ಮಾಡತಾನ ನಿಂಗೆ ಸಾಂತ್ವಾನ

ಅಮ್ಮನ ಮುದ್ದಿನ ಮೂರುತಿ
ಅಪ್ಪನ ತೋಳಲ್ಲಿ ಕೂರುತಿ
ಬೆಳಸುವೆ  ನಮ್ಮನೆ ಕೀರುತಿ
ದೇಶಕ್ಕೆ ನೀನಾಗು ಸತ್ಯದ ಸಾರಥಿ 











Thursday, March 23, 2017

ವೇದಾಂತ, ನಮ್ಮನೆಯ ನಂದಾ ದೀಪ !!


ಸರ್ವದೈವ ಅಶಿರ್ವದಿಸಿದ ಹೂವೇ 
ದೇವಲೋಕದಿಂದ  ಜಾರಿದ ಪಾರಿಜಾತವೇ 
ನಮ್ಮ ಮನೆಯ ನಂದಾ ದೀಪವೇ

ನಿನ್ನ ಅದ್ಜ್ಞೆಯು ಅಳುವೇ 
ನಿನ್ನ ಭಾಷೆಯು ಅಳುವೇ 
ಆದರೂ ಆಗಾಗ ನಗುವೇ 

ಯಾರಿತ್ತರು ಕಚುಗುಳಿಯ ನಿನಗೆ 
ನಗುವಂದೆಸಾಕು ನಮ್ಮ ನೋವಿಗೆ 
ಕಂದನೀನೆ ಕಾರಣ ನಮ್ಮ ನಗುವಿಗೆ  

ನಮ್ಮ ಪ್ರೀತಿಯ ಮಮಕಾರ  
ನಮ್ಮ ಬದುಕಿನ ಸಾಕ್ಷಾತ್ಕಾರ 
ನಮ್ಮ ಕನಸಿನ ಪ್ರತಿಕಾರ 

ಮಡಿಲಲ್ಲಿ ಮಲಗಿರುವ ಕಂದ 
ನೀನು ಚಂದಿರನಿಗಿಂತ ಚೆಂದ 
ನಿನ್ನ ಮಂದಹಾಸ ಹೂವಿಗಿಂತ ಚೆಂದ
 




Monday, March 6, 2017

ಯುವ ಪೀಳಿಗೆ


ಟ್ವಿಟ್ಟರ್ ಫೇಸ್ ಬೂಕ್ ನ ಪೀಳಿಗೆ 
ಸೋಶಿಯಲ್ ಸ್ಟೇಟಸ್ ನ ಬಾಳಿಗೆ 
ಮಾಡರ್ನ ಸಿಟಿ ಲೈಫಿಗೆ 
ಒಂದು ಸಲಾಮು 

ವಾಟ್ಸಾಪ್ ನಡೆಸುವ ಚಾಟಿಗೆ
ಫೆಸ್ ಬೂಕ್ ಮಾಡಿಸುವ ದೋಸ್ತಿಗೆ 
ಗೂಗಲ್ ತೋರಿಸುವ ದಾರಿಗೆ
ಇವರು ಗುಲಾಮು

ಬಲಿಯಾಗಿಹರು ಬಾರಿನ ಚಾಳಿಗೆ
ಸಿಗುವರು ಪಬ್ಬಿನಲ್ಲಿ ಸಂಜೆಗೆ
ಕಳೆಯುವರು ಬಾಳೆಲ್ಲ ಮಂದಗೆ
ಬೇಕಿದೆ ಎಲ್ಲರಿಗು  ಮಲಾಮು

ಹೋಗುಬೇಕು  ಡೆಮೋಕ್ರಸಿಯ ಶಾಲೆಗೆ
ಮಾಡುವರು ಆಗ ದೇಶದ ಏಳಿಗೆ 
ನಾಯಕರು ಇವರೇ ನಾಳೆಗೆ
ಬೇಕಿದೆ ದೇಶಕ್ಕೆ  ಹೊಸ ಕಲಾಮ್








Thursday, February 23, 2017

ಆರು ನೀ ಮನವೇ?


ಆರು ನೀ ಮನವೇ?
ಆವುದು ನಿನ್ನ ಗುಣವೇ?    ।।ಪ।।

ಸಾವಿಲ್ಲದ ಹಸಿ ನೆನಪನು 

ಬೆನ್ನಿಗೇರಿಸಿದ ಬೆತಾಳನಂತೆ ಸುತ್ತಾಡುವ ವಿಕ್ರಮನೆ ?

ನೋವಿಲ್ಲದೆ ಹಗಲಿರುಳು ದುಡಿಯುತ 

ನಾಡಿಗೆ ದೇವರಂತೆ ಅನ್ನವಿಡುವ ರೈತನೇ?

ಪಾವನದಿ ಧ್ರಿಢ ಇಚ್ಛೆಯಲಿ 

ರಾಮನನು ಹನುಮನಂತೆ ಕಾಯುವ ಶಬರಿಯೇ 

ಯವ್ವನದಿ ಚಿಂತೆಗೆ ಚಿತವಿತ್ತು 

ಅಂತರಂಗವನ್ನು ಮೃದಂಗದಂತೆ ತಣಿಸುವ ಯೋಗಿಯೇ 

ತನ್ನ ತಾನೇ ಮೈ ಮರೆತು 

ನೀಲಾಕಾಶದಿ ಸ್ವಇಚ್ಛೆಯಂತೆ ಹಾರಾಡುವ ಪಕ್ಷಿಯೇ?

ಆರು ನೀ ಮನವೇ?

ಆವುದು ನಿನ್ನ ಗುಣವೇ?





Monday, February 13, 2017

ಅಂತರಾಳದಿ ನೂರು ಆಲೋಚನೆ




ಅಂತರಾಳದಿ ನೂರು ಆಲೋಚನೆ
ಮಾಡಬೇಕು ಒಂದು ಸಮಾಲೋಚನೆ
ಕೊಡಬೇಕು ಅವಕೆ ವಿಮೋಚನೆ
ಮನಕೆ ಬೇಕು ನೆಮ್ಮದಿಯ ಸಿಂಚನೆ

ಸಾಗರದ ನಡುವೇ ಆಕಸ್ಮಿಕ ಜನಿಸಿಸುವ
ತೀರಕೆ ಸೇರುವ ತವಕದಿ ಹರಿಯುವ
ತೆರೆಯಂತೆ ಮನದಲಿ ಹುಟ್ಟುವ
ಸಾವಿರ ಯೋಚನೆಯ  ತೆರೆಯ ಸರಮಾಲೆ

ಸಡಗರದಿ ಹೊರಟ ತೆರೆಗಳೆಲ್ಲವು
ಸೇರದೆ ಕರಗುವ ತೆರೆಗಳು ಹಲವು
ತೀರವ ಸೇರುವ  ತೆರೆಗಳು ಕೆಲವು
ಕರಗಿದ ತೆರೆಗೆ  ಸೇರಿದವರು ಚಿರಋಣಿ

ಕರಗಿದ ತೆರೆಗಳ ಆಸೆಹೊತ್ತ ಅಲೆಳು
ಬಂದು ಆಪ್ಪಳಿಸಿವೆ ಮರಳಿನ ತೀರಕೆ
ಜನಿಸಿದೆ ಗೊಂದಲದ  ಚಂಡಮಾರುತ
ಅದಕೆ ಸಿಕ್ಕ ನಾವಿಗ ನನ್ನ ಮನ

ಚಂಡಮಾರುತಕೆ ಸಿಕ್ಕ ನಾವಿಗನಂತೆ
ದ್ವಂದ್ವದ ಚಕ್ರವ್ಯೂಹಕೆ ಸಿಕ್ಕ ಅಭಿಮನ್ಯು ನಂತೆ
ವರಸದಿ ಒದ್ದಾಡುವ ಈ ಮನವನು
ಬಂದು ಕಾಪಾಡು ತಾಯಿ ನಿದ್ರಾದೇವಿ

ಮೇಲಿನಿಂದ ಮೌನ ತಪಸ್ವಿಯಂತೆ ಗತ್ತು
ಒಳಗೆ ಯೋಚನೆಗಳ ವಿಸ್ಮಯ ಜಗತ್ತು
ನಿನ್ನ ಮೌನಕ್ಕೆ ಒಂದು ಸಲಾಮು
ವಿಸ್ಮಯದ ಯೋಚನೆ ಕೋಟಿಗೆ ಸಲಾಮು

Thursday, January 1, 2015

ಪ್ರೀತಿಯ ತಕ್ಕಡಿ ..


 














ಸ್ನೇಹ  ತರುವ ಸಖ್ಯ
ಪ್ರೀತಿ ಕೊಡುವ ಸೌಖ್ಯ
ವಿರಹ ಕೊಡುವ ದುಖ:
ಮಾತಿನಲ್ಲಿ ಹೆಳುವುದು ಹೇಗೆ? 
ಇಲ್ಲಾ, ಪದಗಳಲಿ ಪೂೕನಿಸಲಾ 

ಪದಗಳ ಸಾಲನ್ನು ತಕ್ಕಡಿಯಲಿ ತೂಗುವುದುoಟೆ?
ಭಾವನೆಗಳಿಗೆ ಬೆಲೆಯು೦ಟೆ?
ಪದಗಳಿಗೆ ತೂಕವು೦ಟೆ?
ನೋವಿಗೆ ಆಳ ಉ೦ಟೆ

ದುನಿಯಾದಾಗೆ ಎಲ್ಲಾನು ಕ್ವಾ೦ಟಿಫೖ ಮಾಡ್ತಾರೆ
ಪ್ರೀತಿನ ಮಜ್ನು, ಪಾರುಗೆ ಕಂಪೆರ್ ಮಾಡ್ತಾರೆ 
ಇಲ್ಲಾ, ಪ್ರೀತಿನ ತ್ಯಾಗದಲ್ಲಿ ತೂಗತಾರೆ 
ಪ್ರೀತಿಯಿಂದ ಏನು ಲಾಭ ಅಂತಾರೆ 

ಪ್ರೀತಿಯನು ಅಳೆಯಲು ತಕ್ಕಡಿಯಲ್ಲ ಸ್ಪಂದಿಸುವ ಮನಸ್ಸು ಬೇಕು
ಪ್ರೀತಿಯನ್ನು ಪ್ರೀತಿಯಿಂದ ಅರಿತರೆ ಸಾಕು
ಜಗದ ನೋವಿಗೆ ಪ್ರೀತಿಯ ಮಲಾಮು
ಜೀವನದ ನಲಿವಿಗೆ ಪ್ರೀತಿಗೆ ಸಲಾಮು

ರವಿಯನ್ನ ಮತ್ತು ಚಂದಮಾಮರ ಅಪರೂಪದ ಭೇಟಿ
















 ಹೀಗೆ ಒಂದು ರವಿವಾರದ  ಸೂಟಿ
ರವಿಯನ್ನ ಮತ್ತು ಚಂದಮಾಮರ ಅಪರೂಪದ ಭೇಟಿ
ನಡೆಯಿತು ವಿವಾದ, ಯಾರಿಗೆ ಯಾರು ಸಾಟಿ?

ಮಂದಹಾಸದಿ ಚೆಂದ
ಹರಟೆ ಹೊಡೆಯಲು ಅಂದ
ಯಾವುದು ಚೆಂದ?

ಮೂಡಣದ ಮಾಲಿಕನ ಮುಂಜಾನೆಯ ಚಿಗರು ಮೀಸೆಯ ನಗುವೆ?
ಪಡುವಣದಲಿ ಮಿಂದ ಮಂದಹಾಸದ  ಕೆಂದ ಮೊಗವೆ?
ಅಥವಾ ಕತ್ತಲೆಯ ಲೋಕಕ್ಕೆ ಬೆಳದಿಂಗಳ ಬಾಡದ ಊಟಬಡಿಸುವ ನನ್ನ ಚೆಲುವೆ?

ದಿನದ ನೌಕರಿ ಮುಗಿಸಿ ಹೊರಟಿದ್ದ ಸೂರ್ಯನಿಗೆ ಎಲ್ಲಿಲ್ಲದ ಕೋಪ
ಬಾಡಿಗೆ ಬೆಳಕಿನಲಿ ಲೋಕ ಬೆಳಗುವ ಗುತ್ತಿಗೆದಾರನ ಮಾತು ಕೇಳಿ ತಾಪ
ತಿಳಿಸಬೇಕು ಚಂದಿರನಿಗೆ ಅವನ ನಿಜ ರೂಪ 

ಎಲೊ ಮೂಢನೆ, ತಿಂಗಳ ಕೊನೆಗೆ ಕಾಣದೆ ಓಡುವೆ
ಮುಖದಿ ಎಲ್ಲ ನಿನಗೆ ಮೊಡುವೆ
ಆದರು ಏತಕೆ ನಿನಗೆ ನನ್ನ ಗೊಡುವೆ ?

ನಗುತ ಚಂದಿರ ಅಂದನು ಯಾವದು ಇಲ್ಲ ನನಗೆ ಒಡುವೆ
ಅದುರೂ ನಾನು ಯಾವಾಗಲೂ ನಲೀವೆ  
ಅದುವೆ ನನ್ನ ಚೆಲುವೆ

ನಮ್ಮಿಬ್ಬರ ಕೆಲಸ ಒಂದೇ
ಶಿಫ್ಟ್ ಬೇರೆ ಇದ್ದರು ಕೆಲಸ ಅದೆ 
ಹೊಸ ವರುಷದ ಬೋನಸ್ ಇರದಿದ್ದರೂ ಪಾರ್ಟಿ ಇಂದೆ.. 


Thursday, September 18, 2014

ನನ್ನ ಮತ್ತು ನನ್ನವಳ ದೋಸ್ತಿ..

ನನ್ನ  ಮತ್ತು ನನ್ನವಳ ದೋಸ್ತಿ
ತುಂಬಾ ತುಂಬಾ ಜಾಸ್ತಿ 
ಪ್ರೀತಿಯೆ ನಮ್ಮ ಸ್ತಿರಾಸ್ತಿ 
ಅದುವೆ ನಮ್ಮ ಮೆಣ ಬಸತಿ

ನನ್ನ ಮತ್ತು ನನ್ನವಳ ದೋಸ್ತಿ
ಯಾವಾಗಲೂ ಮಸ್ತಿ 
ಒಮ್ಮೆಮ್ಮೆ ಬಿಳುತ್ತೆ ಕುಸ್ತಿ
ಖಂಡಿತಾ ಅವಳಿಗೇ ಪ್ರಶಸ್ತಿ 

ನನ್ನ ಮತ್ತು ನನ್ನವಳ ದೋಸ್ತಿ
ಬಿಟ್ಟರೆ, ಜೀವನವೇ  ನಾಸ್ತಿ 
ಅವಳ ಮನದಲ್ಲೆಯೇ ನನ್ನ ವಸತಿ 
ಅವಳೇ ನನ್ನ ಸತಿ, ಆತ್ಮರತಿ

ನನ್ನ ಮತ್ತು ನನ್ನವಳ ದೋಸ್ತಿ 
ಗಟ್ಟಿ ಬಂಗಾರದ ಸೂರ್ತಿ 
ಬಿಟ್ಟಾಗ ಬಿರುಕು ಒಂದೊಂದ್ ಸರ್ತಿ 
ಮಾಡಬೇಕು ತುರಂತ ದುರಸ್ತಿ 

ಜೀವನ ಕಷ್ಟ ಸುಖಗಳ ಜಂಗಿಕುಸ್ತಿ 
ಜೋಡಿ ಕೂಡಿ ಹೋರಾಟವೆ ನಮ್ಮ ಆಸ್ತಿ 
ಅಂತರಂಗದ ಆತ್ಮವಿಶ್ವಾಸ ಚಿರಾಸ್ತಿ 
ಸಂಭಂದದ ಸರಪಳಿಗಳು ಜಬರದಸ್ತಿ ..  

 

ಮನವೆ, ತುಟಿಗಚ್ಚಿ ಹಿಡಿಯದಿರು ನೋವ..

ಮನದಿ ತುಟಿಗಚ್ಚಿ ಹಿಡಿದಿರುವ ನೋವ 
ಬಾರದೆ ಅಡಗಿರುವ ಮಾತುಗಳ ಭಾವ
ಬರದ ಮಾತನು ಪದಗಳಲಿ ಪೊನಿಸಿದ ಕಾವ್ಯ
ಸೇರಿಸಿದರೆ ಕವನಕೊಂದು ರಾಗದ ಜೀವ
ಸುರದಿ ಆಗುವುದು ಸುಂದರ ಭಾವಗೀತೆ 
ಕೇಳಿದರೆ ಆ ಗೀತೆ ಮಿಡಿಯುವುದು ಹೃದಯ
ಮುಸ್ಸಂಜೆಯ ತಂಪಲ್ಲಿ ಮಿಂದಂತೆ ಬೆಂದ ಜೀವ
ತುಂತುರಿನ ತಂಗಾಳಿಯಲಿ ತೆಲಿಹೊದಂತೆ ಮನದ ನೋವ 

ಚಿಂತಿಸದಿರು ಮತ್ತೆ ಮರುಕಳಿಸಿದರೆ ನೋವ
ಮತ್ತೆ ನೇಸರನು ಚೆಲ್ಲತಾನ ಮುಂಜಾವ
ಎಲ್ಲೆಲ್ಲೂ ಹಸಿರಾಗಿ ಚಿಗಿರ್ತಾವ ಮಾವ  
ಸುತ್ತ ಪರಿಸರದಿ ಅರಳುತಾವ  ಹೂವ
ಎತ್ತೆಲೆತ್ತಲೂ ಪಸರಿಸುತ್ತಾವ ಲವಲವಿಕೆಯ ಛಾಯೆ

ಮತ್ತೆಕೆ ಬೇಸರ ಜೀವವೆ?
ಮತ್ತೆ ನೇಸರನು ಬರುತಾನ ಕಳಿಯೊಕೆ ನೋವ
ಮನವೆ, ತುಟಿಗಚ್ಚಿ ಹಿಡಿಯದಿರು ನೋವ..  


Saturday, September 13, 2014

'ಅಮಾವಾಸ್ಯ' .. ಒಂದು ನಾಟಕ


ಅಂದು ಕಂಡ ದೃಶ್ಯವು ವೖಶಂಪಾಯನ ಸರೋವರದಲ್ಲಿ ಅಡಗಿಕೊಂಡಿದ್ದ ದುರ್ಯೊಧನನ್ನು ಹೊಡಿದೆಬ್ಬಿಸಿದಂತೆ ನನ್ನ ಮನದಲ್ಲಿ ಅಡಗಿ ಕುಳಿತಿದ್ದ ನನ್ನ ಕಲ್ಪನಾಶಕ್ತಿಯನ್ನು ಎಚ್ಹರ ಮಾಡಿತ್ತು. ಅದು 'ಅಮಾವಾಸ್ಯ' ಎಂಬ ನಾಟಕ. ಅಮೆರಿಕದಲ್ಲಿ ನೊಡಿದ ಮೊಟ್ಟ ಮೊದಲ ನಾಟಕ. ಅದು ಸಂಗಿತ, ಸಾಹಿತ್ಯ, ನಟನೆ ಹಾಗೂ ನಾಟ್ಯಕಲೆಯ ಒಂದು ಅತ್ಯುನತ ಮಿಶ್ರಣ. (ಅದಕ್ಕೆ ನನ್ನ  ಶ್ರೀಮತಿಯ ಫ್ರೆಂಡ್ 'ಶಚಿ'ಗೊಂದು ದನ್ಯವಾದ.
ಈ ಒಂದು ನಾಟಕ ನನ್ನಂತವನಿಗೆ ನಿಜವಾಗಲು ಒಂದು ಸ್ಪೂರ್ತಿ. ಬರೆಯುವ ಗಿಳಿದ್ದರು (ಹಾಬಿ) ಇದ್ದರನೂ  ಸರಿಯಾದ ಸ್ಫೂರ್ತಿ ಇಲ್ಲ, ಸನ್ನಿವೆಷ ಇಲ್ಲ, ಅಂತ ತಮಗೆ ತಾವೆ ಹೆಳ್ಕೊಂಡು lazyಯಾಗಿ ತಿರಗೊರಿಗೆ ಒಂದು ನಿಜವಾದ ಸ್ಫೂರ್ತಿ. ನಿಜ ಹೆಳ್ಬೆಕು ಅಂದ್ರೆ software ಅಟೊಮೆತಿಕ್ life ನಲ್ಲಿ ಸೃಜನಶಿಲತೆ ಇಲ್ಲ ಅಂದ್ರೆ ಜಿವ ಇರೊ robotಗಳಂತೆ ನಾವು. Then we are mere machine which follows set of instructions written by someone. ನಾಟಕ ಸೃಜನಶಿಲತೆಯ ಬಂಡಾರ.  ಅದು ನಮ್ಮ ಪುಟ್ಟ ಹೃದಯಕ್ಕೆ ಸಂತೋಷದ ಚಿಲುಮೆ ಹುಟ್ಟಿಸುತ್ತೆ, ಅದು ಮತ್ತೆ ಸಹಸ್ರಾರು ಸೃಜನಶಿಲತೆಯ ದೀಪಗಳನ್ನು ಹಚ್ಚುವುದು ಶತಸಿದ್ಧ. 'ಅಮಾವಾಸ್ಯ' ಆ ಸ್ಪೂರ್ ಎಂಬದಕ್ಕೆ ನನ್ನೀ ಎರೆಡು ಸಾಲು..  

ಬಣ್ಣ ಹಚ್ಚಿದರಷ್ಟೆ ನಾಟಕವಾಗದು
ಅದಕ್ಕೆ ಒಂದೆರೆಡು ಸಾಲು
ಆ ಸಾಲಿಗೆ  ಆರ್ಥ  
ಒಂದು  ಸುಮದುರವಾದ ರಾಗ 
ಆ  ರಾಗಕ್ಕೆ ಜೀವ 
ಮತ್ತೆ ಸುಂದರವಾದ ಸಾಹಿತ್ಯ
ಸಾಹಿತ್ಯಕ್ಕೆ ತಕ್ಕ ನೃತ್ಯ 
ಅದೊಂದು ಸುಂದಕಾಂಡವಾಗುವುದು 
ಪ್ರೇಕ್ಷಕ ಮಂತ್ರಹಾಕಿದ ಮೂಕನ೦ತೆ 
ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ
ತನು ಮನ ತೂಗುವನು
ಅದಕ್ಕೆ 'ಅಮಾವಾಸ್ಯ' ಸಾಕ್ಷಿ
 
Creativity is a chain reaction, an act of creativity enlightens zillions of minds with or without knowledge of it.



Saturday, December 11, 2010

ನೀನೆ ನನ್ನ ಪರಪ೦ಚ ...

ಪ್ರೀತಿ ಅಂದರೇನು? ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸ್ತಾರೆ ? ಪ್ರೀತಿ ಆಳ ಕಂಡು ಹಿಡಿದವರ್ಯಾರು? ಆ ಆಳವನ್ನು ಅರಿಯಲು ತ್ಯಾಗದ ಅವಶ್ಯಕತೆ ಎಷ್ಟು? ಒಬ್ಬರು ಇನ್ನೊಬ್ಬರಿಗಾಗಿ ಏನನ್ನು ಅಥವಾ ಯಾರನ್ನು ತ್ಯಜಿಸುತ್ತಾರೆ ಅನ್ನುವ ಮೂಲಕವೇ ಪ್ರೀತಿಯನ್ನು ಅಳಿಯಬೇಕಾ? ಪ್ರೀತಿಗೆ ತ್ಯಾಗಕ್ಕೆ ಎ೦ತಹ ಸ೦ಬ೦ಧ? ಎರೆಡಕು ಏನು ಭಾ೦ದವ್ಯ? ಪ್ರೀತಿಯನ್ನು ತ್ಯಾಗವೆ೦ಬ ಇ೦ಚುಪಟ್ಟಿಯಿ೦ದಲೆ ಅಳಿಯಬೇಕಾ ? ಅದಕ್ಕೆ ಬೇರ್ಯಾವ ಮೌಲ್ಯಮಪಾನ ಸಾಟಿ ಇಲ್ವಾ ?

ಎರೆಡು ಪ್ರೀತಿಸುವ ಮನಸ್ಸುಗಳು ಸದಾ ಒಂದನ್ನೊಂದು ನೀನೆಸ್ಟು ನನ್ನನ್ನು ಪ್ರೆತಿಸ್ತೀಯಾ ಅ೦ತ ಯಕ್ಷಪ್ರಶ್ನೆಯನ್ನು ಹೆಗಲಮೆಲೆರಿಸಿಕೊ೦ಡೆ ಸವಾರಿ ಮಾಡುತ್ತಿರುತ್ತವೆ. ದೆವಾನ್ ದೇವತೆಗಳಾಗಿರಲಿ, ಮಹಾನ್ ಪ್ರೆಮಿಗಳಾಗಿರಲಿ, ಯುವ ಪ್ರೆಮಿಗಳಾಗಿರಲಿ ಈ ಯಕ್ಷ ಪ್ರಶ್ನೆ ಸದಾ ಇದ್ದೆ ಇರುತ್ತದೆ. ಎಸ್ಟೆ ವರ್ಷಗಳ ಪ್ರೀತಿಯಾಗಿರಲಿ, ಎಸ್ಟೆ ದಿನಗಳ ಪ್ರೆತಿಯಾಗಿರಲಿ ಪ್ರತಿಗಳಿಗೆಯಲ್ಲೂ ಎಲ್ಲ ಪ್ರೇಮಿಗಳೂ ಈ ಪ್ರಶ್ನೆಗೆ ಒಂದಲ್ಲ ಒಂದು ರೇತಿಯಿ೦ದ ಉತ್ತರ ಕೊಡ್ತಾನೆ ಇರ್ತಾರೆ.

ಸಹಸ್ರಾರು ಕೋಟಿ ಜನರಿರುವ ಈ ವಿಶಾಲ ಜಗತ್ತಿನ್ನಲ್ಲಿ ನಾನು ಒಬ್ಬ ವ್ಯಕ್ತಿ. ಅವಳೊಬ್ಬ ವ್ಯಕ್ತಿ. ನನಗೆ ಅವಳೇ ಪರಪಂಚ. ಅವಳಿಲ್ಲದೆ ಈ ಪರಪಂಚ ನನಗೆ ಶೂನ್ಯ. ಅವಳಿಗೆ ನಾನೇ ಪರಪ೦ಚ. ಅವಳಿಗೆ ನಾನೇ ಪರಪಂಚ ಅನ್ನೋದೆ ಈ ಜೀವಕ್ಕೆ ಸಮಾಧಾನ. ನನ್ನವಳಿಗೆ ನಾನೇ ಪರಪಂಚ ಅನ್ನೋ ಭಾವನೆಯ ಸಾಕು ಬದಕು ಕಟ್ಟಲು, ಕನಸು ಹೆಣೆಯಲು. ಆ ಭಾವವೇ ಯಾವ ತ್ಯಾಗಕ್ಕೂ ಸಿದ್ದ ಮಾಡುತ್ತದೆ. ಆ ತ್ಯಾಗವೇ ಪ್ರೀತಿಯಂಬ ದೀವಿಗೆಗೆ ಎಣ್ಣೆಯಾಗಿ ಸದಾ ಬೆಳಗುವಂತೆ ಮಾಡುತ್ತದೆ. ತ್ಯಾಗವೊಂದೆ ಪ್ರೀತಯ ಮುಲ್ಯಮಾಪನ ಅನ್ನೋದು ಸತ್ಯವಲ್ಲವಾದರು ತ್ಯಾಗ ಪ್ರೀತಿಯ ಒಂದು ರೂಪ.

ಪುಟ್ಟನ೦ಜಿ ಇಲ್ಲದೆ ರತ್ನನ ಪರಪಂಚ ಇಲ್ಲ
ನೀನಿಲ್ಲದೆ ನನ್ನ ಪರಪಂಚ ಇಲ್ಲ
ನಾನೇ ನಿನ್ನ ಪರಪಂಚ ಎಂಬ ಭಾವವೆ ಸಾಕು
ಹೃದಯ ಅರಳಲು
ಕನಸು ಚಿಗಿಯಲು
ಬದುಕು ಕಟ್ಟಲು
ನೀನೆ ನನ್ನ ಪರಪ೦ಚ ...
ನೀನೆ ನನ್ನ ಪರಪ೦ಚ ...

Sunday, November 28, 2010

ಶ೦ಖದಿ೦ದ ಬಂದ್ರನ ತೀರ್ಥ..

ಮಾತಾಡಿದರ ಮುತ್ತಿನಂಗ ಇರಬೇಕು
ಮಾತಾಡಿದರ ಸಲಾಕಿಹಂಗ ಇರಬೇಕು
ಹಂಗ ಮಾತಾಡಬೇಕು ಹಿಂಗ ಮಾತಾಡಬೇಕು
ಅಂತ ಬಸವಣ್ಣ ಹೇಳಿದ್ದನ್ನು
ಮಸ್ತಾರ್ ಸಾಲ್ಯಾಗ ಕಲಿಸಿದ್ರು...


ಮಾತಾಡಿದರ ಅರ್ಥ ಇರಬೇಕು
ಪ್ರತಿ ಶಬ್ದದಾಗ ತೂಕ ಇರಬೇಕು
ಮನಸನೆ೦ದು ಮಾತನ್ಯಾಗ ಇರಬೇಕು
ಮಾತನೆ೦ದು ಮನಸ್ನ್ಯಾಗ ಇರಬೇಕು
ಅಂತ ನಮ್ಮಮ್ಮ ಹೇಳಿದ್ದಳು


ಯಾರು ಹೇಳಿದ್ದು ಎಷ್ಟು ತೆಲ್ಯಾಗ ಹೊಕ್ಕಿರ್ಲಿಲ್ಲ
ಇವತ್ತ ನನ್ನಾಕಿಗೆ ಏನೋ ಅಂದ್ಯಾ,
ಆಕಿ ಏನ ತಿಳಕೊ೦ಡ್ಳು
ಆವಾಗ ನಮ್ಮಮ್ಮ ನಮ್ಮ ಮಾಸ್ತರ
ಹೇಳಿದ್ದು ನೆನಪಿಗೆ ಬಂದಿತ್ತು ...

"ಅದಕ್ಕ ಅನ್ನುದು ಶ೦ಖದಿ೦ದ ಬಂದ್ರನ ತೀರ್ಥ ಅಂತ ...."
ಎಲ್ಲಿ೦ದ ಬೇಕು ಅಲ್ಲಿ೦ದ ಬ೦ದ್ರ ಲಗೂನ ತಿಳದ ತಿಳಿತೈತಿ .."

Saturday, November 20, 2010

ಬಚ್ಚಿಟ್ಟ ಬುತ್ತಿ ..

ನಾ ಕೊಟ್ಟ ಗೆಜ್ಜೆ ಕಟಗೊ೦ಡು
ಲಜ್ಜೆಯಿ೦ದ ನಾಚಗೊ೦ಡು
ಹೆಜ್ಜಿ ಮ್ಯಾಲ ಹೆಜ್ಜಿ ಹಕ್ಕೊ೦ಡು
ನೆಡೆವ ಅವಳನ್ನು,
ಅವಳ ತು೦ಟ ನಗೆಯನ್ನು,
ಹೊಳೆವ ಕ೦ಗಳನ್ನು
ನನ್ನ ಕಣ್ಣ ರೆಪ್ಪೆಯಲಿ ಸೆರೆ ಹಿಡಿದು
ಎದೆಯ ಗೂಡಲಿ ಬಚ್ಚಿಟ್ಟು
ಅವಳ ನೆನಪಾದಗೊಮ್ಮೆ
ಬಚ್ಚಿಟ್ಟ ಬುತ್ತಿಯ ಬಿಚ್ಚಿ
ತಿನ್ನುವ ಬಾಗ್ಯ ನನ್ನದಿರಲಿ !!

Monday, October 25, 2010

ನನ್ನಾಕಿ ..ನಾಚಿಕೊ೦ಡಾಗ ಇನ್ನು ಚಂದಾಕಿ ..

ಆಕಿ ಮಾಡ್ಯಾಳ ಮೋಡಿ
ನಾ ಆಗೀನಿ ಮೂಡಿ
ಆಕಿಗೆ ಹೇಳಬೇಕು ಕಾಡಿ
ನಮ್ಮಿಬ್ಬರದು ಎಂತ ಜೋಡಿ

ನಂದು ಆಕಿದು ಜೋಡಿ
ಹೇಳಿ ಮಾಡಸ್ತಂಗ್ ಐತಿನೋಡ್ರಿ
ನಾನು ಆಕಿ ಕೂಡಿ
ನೆಡ್ಸಬೆಕು ಜೀವನದ ಸ್ಕೊಟರ ಗಾಡಿ

ನನ್ನ ನೋಟಕ್ಕ ನಗೆಯ ಚೆಲ್ಲಿ
ಕರ್ಪೂರದಂಗ ಕರಗ್ತಾಳ
ನನ್ನ ಮಾತಿಗೆ ಹುಬ್ಬೇರಿಸಿ
ಹೌದು ಹೌದು ಅಂತಾಳ

ಆಕಿ ಕಣ್ಣಾಗ ಕಣ್ಣಿಟ್ಟು ನೋಡೀದ್ರ
ನಾಚಿ ನೀರ್ ಆಗ್ತಾಳ
ಆಕಿನ ಹೊಗಳೀದ್ರ
ಹಾರಿ ಹಕ್ಕಿ ಆಗ್ತಾಳ

ಶೆಟ್ಟರ ಹುಡಗಿ ಸೆಟಗೊ೦ಡ್ರ
ಬಾಳ ಚೆಂದ ಕಾನತಾಳ
ಸಾಫ್ಟ್ವೇರ್ ಹುಡಗಿ ನಾಚಕೊ೦ಡ್ರ
ಮಿರಿ ಮಿರಿ ಮಿಂಚತಾಳ

Sunday, October 24, 2010

(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ಹೆಂಗೋ ಏನೋ BE ಮುಗುಸು
ಎಲ್ಲಾ ಕಂಪನಿಗೆ ಅಪ್ಲೈ ಮಾಡು
ಸಿಕ್ಕಿದ್ ಕಂಪನಿ ಜಾಇನ್ ಆಗು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ವೀಕೆಂಡ್ ಆಫೀಸ್ಗೆ ಹೋಗಿ ಬ್ರೌಸಿಂಗ್ ಮಾಡು
ಕ್ಲೈಂಟ್ ಉಗಿಯೋವಾಗ ಮ್ಯೂಟ್ ಮಾಡಿ ಹರಟೆ ಹೊಡಿ
ಕ್ವಾರ್ಟರ್ ಏಂಡ್ ಗೊಮ್ಮೆ ರೆಸಾರ್ಟ್ ಹೋಗಿ ಕ್ಯಾಕಿ ಹೊಡಿ
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ವರ್ಷಕೊಮ್ಮೆ ಹೈಕ್ ತೊಗೋ
ಒಕೆಯಾದ್ರೆ ಇನ್ನೊಂದು ವರ್ಷ ಅಲ್ಲೇ ಕೊಳಿತಿರು
ಬೇಜಾರಾದ್ರೆ ಇನ್ನೊಂದು ಕಂಪನಿಗೆ ಜಂಪ್ ಹೊಡಿ
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ಆಫಶೋರ್ ಇದ್ದವರಿಗೆ ಆನ್ಸೈಟ್ ಚಾನ್ಸ್ ಬೇಕು
ಆನ್ಸೈಟ್ ಇದ್ದವರಿಗೆ ಆಫಶೋರ್ ಹುಡಗಿ ಬೇಕು
ಎರೆಡು ಸಿಗದೇ ಮುವತ್ತಾದ್ರೆ ಸಿಕ್ಕವರು ಶಿವಾ ಅ೦ದು ರೈಟ್ ಹೇಳು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ಜೋಡಿಯಾಗಿ ಸಿರಿಯಲ್ಸ್ ತಿಂದು ಆಫೀಸ್ ಹೋಗು
ಮದ್ಯಹ್ನದೊತ್ತು ಆಫೀಸ್ ನಲ್ಲೆ ಲ೦ಚ್ ಮಾಡು
ಡಿನ್ನರ್ ನಲ್ಲಿ ಬರ್ಗರ್ ತಿ೦ದು ಗುಡ್ ನೈಟ್ ಹೇಳಿ ಬೆಡ್ಡಿಗೆ ಹೋಗು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ಹೆಸರಿಗೆ ಮಾತ್ರ ಡಬಲ್ ಇನ್ ಕಂ
ಆದರು ಸಾಲ್ವ್ ಆಗಿಲ್ಲ ಫೈನಾನ್ಸ್ ಪ್ರಾಬ್ಲಂ
ಇಯರ್ ಏಂಡ್ ಆದ್ರೆ ಟ್ಯಾಕ್ಸ್ ರಿಬೇಟ್ ಹುಡುಕು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!


ಬೆಂಗಳೂರಲ್ಲಿ 30/40 ಸೈಟ್ ಕನಸ ಕಾಣು
ಫ್ಯಾಮಿಲಿ ಪ್ಲಾನಿಂಗ್ ಹೆಸರ್ನಲ್ಲಿ ಜೀವನ ಮಾಡು
ಮಿಡ್ ಲೈಫ್ ಕ್ರೈಸಸ್ನಾಗ ಜೀವನ ಮಾಡು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

Tuesday, August 3, 2010

ಹಿಗೊ೦ದು ವೀಕ್ಎಂಡ್ ...

ಲ್ಲ ಶನಿವಾರದ ಹ೦ಗ ವಾರ ಕ್ರಿಕೆಟ್ ಇರ್ಲಿಲ್ಲ ... ಆರಾಮಾಗಿ AM ಹೋಗಿ PM ಆದ ಮ್ಯಾಗ ಎದ್ದ್ಯಾ.
ಅಸ್ಟು ಲೇಟಾಗಿ ಎದ್ರುನು ಹಾಸಿಗೆ ಬಿಟ್ಟು ಏಳೊ ಮನಸಿರ್ಲಿಲ್ಲ ....ಸರೀ ಅಂತ system ನಲ್ಲಿಹಾಡು ಆದ್ರು ಕೇಳಿದ್ರಾಯ್ತು ಅನ್ಕೊಂಡು, ಒಳ್ಳೆ ಹಾಡು ಹುಡುಕ್ತಾ ಇದ್ದೆ ...ಅಸ್ಟರಲ್ಲಿ ಪ್ರವೀಣ್ ಗೊಡ್ಕಿ೦ಡೆ ಅವರ "ರಾಗಿಣಿ" ಸಿಕ್ತು. ಕರೆವ೦ದ್ರ ಬಾಳಾ ಚೊಲೋ ಕ೦ಪೊಸಿಶನ್. ಕೊಳಲು ಹಾಗು ತಬಲಾ ಮಿಶ್ರಿತ instrumental ಕೇಳ್ತಾ ಕೇಳ್ತಾ ಹೋದ್ರೆ ಹಂಗೆ ಮೈ ಮರೆತೊಗ್ತೀವಿ. ನನ್ನ ಎಲ್ಲ ಮೆಚ್ಚಿನ ಹಳೆಯ ಹಾಡುಗಳನನ ಹಿ೦ದುಸ್ತಾನಿ ಮೂಲ ರಾಗ ಹೆಸರಿನಲ್ಲಿ ಸ೦ಯೊಜಿಸಿದ್ದಾರೆ. ಕೊಳಲಿನ ಇ೦ಪಾದ ನಾದದಲ್ಲಿ ಸೊಗಸಾಗಿ ಹೆಣೆದಿದ್ದಾರೆ.
(http://www.kannadaaudio.com/Songs/Instrumental/home/Ragini1.php)


ಸರಿ ಒಟ್ಟಿನಲ್ಲಿ ದೊಡ್ಡ ಮನಸ ಮಾಡಿ ಎದ್ದೆಬಿಟ್ಟೆ. ಅಡಿಗೆ ಮೆನೆಗೆ ಹೋಗಿ ಕಳ್ಳ ಬೆಕ್ಕಿನ ಹ೦ಗ ಇಣುಕಿ ನೋಡಿದೆ...
ಅಪ್ಪಿ ತಪ್ಪಿ roomies ಏನಾದ್ರು ಮಾಡ್ಯಾರನು ಅಂತ ಇಣಿಕಿ ನೋಡಿದೆ .. ನನ್ನ ಪುಣ್ಯಕ ಚಾ ಮಾಡಿದ್ರು ....ಸ್ವಲ್ಪ ಉಳಿಸಿದ್ರು ಕೂಡ. ಕಪ್ಪನ್ಯಾಗ ಚಾ ಹಾಕ್ಕೊಂಡು ಮೈಕ್ರೋವೇವ್ ನ್ಯಾಗ ಬೆಚ್ಚಗ ಮಾಡಕೊ೦ಡು ಬಂದು ಇನ್ನೊಂದು ರೌಂಡ್ ಹಾಡು ಕೇಳಿದ್ರಾತು ಅಂತ ಬ೦ದು ಕೂತ್ಕೊಂಡೆ. ಒ೦ದು ಚೊಲೋ ಹಾಡು ಸಿಕ್ತು. ತ೦ಡ್ಯಾಗ ಬಿಸೆ ಚಾ ಹೇರಕೊ೦ತ ಮಧುರ ಹಾಡುಗಳನ್ನೂ ಕೇಳೋದ್ರಲ್ಲಿ ಇರೋ ಮಜಾ ಆಸ್ಟಿಸ್ಟಲ್ಲ

ಎಲ್ಲಿ ಜಾರತೋ
ಮನವು, ಎಲ್ಲೇ ಮೀರೀತೋ
ಎಲ್ಲಿ ಅಲ್ಲಿ ಅಲೆತಿಹುದೋ
ಏಕೆ ನಿನ್ನದಯತೋ .....

ಮೈಸೂರು ಅನ೦ತಸ್ವಾಮಿ ಅವರ ಸ೦ಗೀತ ಮತ್ತೆ ರತ್ನಮಾಲ ಪ್ರಕಾಶ್ ಅವರ ಧ್ವನಿ. ಇದು ಅಸ್ಟೆ ಅಲ್ಲ ಭಾವಸ೦ಗಮದಲ್ಲಿ ಇರೋ ಹಾಡು ಭಾಳ ಚೆ೦ದ ಅದವು .

ನಿಜವಾಗಲುನು ವೀಕ್ಎಂಡ್ ಬಂದರ ಎರೆಡು ದಿವಸದ ಟೈಮ್ ಟೆಬಲ್ಲಿಗು ಮತ್ತ ಉಳದ ಐದು ದಿವಸದ ಟೈಮ್ ಟೆಬಲ್ಲಿಗು ಅಜ ಗಜಾ೦ತರ ವ್ಯತ್ಯಾಸ. ವೀಕ್ ಡೇಸ್ ನಲ್ಲಿ ಕಾಲಚಕ್ರವನ್ನು ಬೆನ್ನತ್ತಿ ಒಡಕೊ೦ತ ಒಡಕೊ೦ತ ಉಸಿರಾಡಿಸೋದಕ್ಕು ಟೈಮ್ ಇಲ್ಲಲಲಪ ಅನಸುತ್ತ , ಬ್ಯಾಸರ ಆಗೇತಿ ಅ೦ತ ಸ್ವಲ್ಪ ಅರಾಮ ಮಾಡೊಕ್ಕು ಆಗೋಲ್ಲ. ಆದರೆ ವೀಕ್ ಎಂಡ್ ನಲ್ಲಿ ಇರುವ ನಲವತ್ತೆಟು ತಾಸಿಗುನು ನಾವ ರಿ೦ಗ್ ಮಾಸ್ಟರ್. ನಮ್ಮ ಜೀವನ ಹೆ೦ಗ ಬೇಕಾದ್ರೂ ಹ೦ಗ ಸಾಗಿಸಬಹುದು. ಏನ್ ಮಾಡಿದ್ದ್ರುನು ಯಾರು ಕೇಳೌರ್ ಇರ೦ಗಿಲ್ಲ. "ಕರದು ಕಟ್ಟವರು ಇರಂಗಿಲ್ಲ ತುರಿಸಿ ಮೇವ ಹಾಕೌರ್ ಇರ೦ಗಿಲ್ಲ". ನಮ್ಮದ ಸಮ್ರಾಜ್ಯಾ, ನಾವ ದೊರೆ, ನಾವ ಪ್ರಜೆ. ಬೇಕಾದಷ್ಟು ನಿದ್ದಿ ಮಾಡು, ಹೊಟ್ಟಿ ಹಸದರ ಊಟ ಮಾಡು ಇಲ್ಲಂದ್ರ ಉಪಾಸ ಇರು. ಹಸದಾಗ ಕೂಳು ಇಲ್ಲ೦ದ್ರ ಐತೆಲ (ಪಿಜಾಯನಮಹ:) ಫೋನು ಎತ್ತದು ಪಿಜಾ ಆರ್ಡರ್ ಮಾಡೋದು. ಎರಡು ದಿವಸದಾಗ ಗಾಂಧಿಜಿ ನಮಗ ಸ್ವತ೦ತ್ರ್ಯ ತ೦ದು ಕೊಟ್ಟಿದ್ದು ಎಷ್ಟು ಚೊಲೋ ಆತಪ ಅ೦ತ ಅನಸುತ್ತ.

ಹಿ೦ಗ ಕನ್ನಮುಚ್ಚಿ ಕಣ್ಣ ಬಿಡುದ್ರಾಗನ "so called weekend" ಮುಗದಿರುತ್ತ.. ಸೋಮವಾರ ನೆನಸಿ ಕೊ೦ಡ್ರ ಹೊಟ್ಟ್ಯಾಗ ಹೆಗ್ಗಣ ಓಡಾಡಿದ೦ಗ ಅನಸಾಕ್ ಕು೦ದರತೈತಿ. ವೀಕ್ಎಂಡ್ ಕಾಮನಬಿಲ್ಲು ಇದ್ದ೦ಗ, ದೋರದಗಿ೦ದ ಬಾಲ ಚ೦ದ ಕಾನತ್ತ ಸಮೀಪ ಹೋದ ಕೂಡಲೇ ಮಾಯ ಆಗಿರ್ತೈತಿ. ಬಂತಪ ವೀಕ್ ಎಂಡ್ ಅ೦ತ ಖುಷಿಪಡುಕಿ೦ತ ಮು೦ಚೆಕನ ಹೊತಲಪ ವೀಕ್ ಎಂಡ್ ಅ೦ತ ಸ೦ಕಟ ಪಡು ಹ೦ಗ ಮಾಡುತ್ತ.
ಅದಕ್ಕೆ ಯಾವದೋ ಒಬ್ಬ ಮೆಧಾವಿ ಸರಿಯಾಗಿಯೇ ಹೇಳಿದ್ದಾನೆ. "There aren't enough days in the weekend"

Tuesday, July 27, 2010

ಕ್ರಿಸ್ನಾ ಸಪ್ಪನ್ ಬ್ಯಾಳಿರಿ ....

ಮುಂದಿನ ತಿಂಗಳು ಭಾರತಕ್ಕೆ ಹೋಗಲು ಟಿಕೆಟ್ಸ್ ಬುಕ್ ಮಾಡಿ ಬಂದು ಒಂದು ಕಪ್ ಟೀ ಹೀರತಾ ವರಾ೦ಡದಲ್ಲಿ ಕುಳಿತಿದ್ದೆ, ಅವಾಗ ಕಳೆದಬಾರಿಯ ಭಾರತದ ಪ್ರವಾಸ ನೆನಪಿಗೆ ಬ೦ತು. ಆ ಬಾರಿ ಬಹಳ ನೆನಪಿಡುವ ಘಟನೆ ನೆಡದಿದ್ದರೂ ಒ೦ದು ಘಟನೆ ನೆನಸಿ ಕೊಂಡು ತುಂಬಾ ನಗು ಬರ್ತಾ ಇತ್ತು. ಆ ದಿನಗಳಲ್ಲಿ ಇಲ್ಲಿ ಭಾರತಿಯರ ಮೇಲೆ ಹಲ್ಲೆ ನೆಡದಿದ್ದ ವರದಿಗಳು ನ್ಯೂಸ್ ಚಾನೆಲ್ಗಳಲ್ಲಿ ಸರ್ವೇ ಸಾಮಾನ್ಯವಾಗಿತ್ತು. ನಮ್ಮ ಊರಿಗೆ ಹೋದಾಗ, ಅಲ್ಲಿ ಹೊಲದ ಕಡೆ ಹೋಗಿದ್ದೆ. ಅಲ್ಲಿ ನನಗೆ ಪರಿಚಯ ಇದ್ದ ಕೆಲವು ರೈತರು ಸಿಕ್ಕು ಯೋಗಕ್ಷೇಮ ವಿಚಾರಿಸಿ ಮಾತಾಡಿಸಿದರು. ಅವರಲ್ಲಿ ಒಬ್ಬರು ಎಲ್ಲಪ್ಪ ಅಂತ. ಬಾಲ್ಯದಿಂದಲೂ ಅವರ ಜೊತೆ ಒಡನಾಟ ಜಾಸ್ತಿ.
ಅವರೊಡನೆ ನೆಡದ ನೇರ ಸಂಭಾಷಣೆಯನ್ನು ನಿಮ್ಮ ಮುಂದೆ ಇಡುತಿದ್ದೇನೆ

ಎಲ್ಲಪ್ಪ: ಏನ್ ಶೆಟ್ಟರು, ಹೆಂಗ ಅದೀರಿ ...
ನಾನು: ಆರಾಮ ಅದೀನ್ರಿ
ಎಲ್ಲಪ್ಪ: ನೀವು ಫರೆನ್ಗೆ ಹೋಗಿದ್ರೆಲ ...
ನಾನು: ಹೂನ್ರಿ ..
ಎಲ್ಲಪ್ಪ: ಅಮೆರಿಕದಾಗ ಇದ್ರೆಲss
ನಾನು: ಹೂನ್ರಿ, ಮು೦ಚೆಕ ಅಲ್ಲೇ ಇದ್ದಿನ್ರಿ , ಈಗ ಆಸ್ಟ್ರೇಲಿಯದಾಗ ಅದೀನ್ರಿ.
ಎಲ್ಲಪ್ಪ: ಒಹ್ ಹ೦ಗನ್ರಿ, ಅಲ್ಲಿನು ಉಳ್ಳಗಡ್ಡಿ ೧೫೦ ರುಪಾಯಕ್ಕ ಕೆಜಿ, ಅಕ್ಕಿ ಸಾವಿರುಪಾಯಕ್ಕ ಹತ್ತ ಕೆಜಿ ಅನ್ನ್ರಿ ಮತ್ತs ...
[ಅವರು ನಾನು ಅಮೆರಿಕಾದಾಗ ಇದ್ದಾಗ ಹೇಳಿದ್ದ ಇರುಳ್ಳಿ, ಅಕ್ಕಿ ಬೆಲೆಯನ್ನು ನೆನಪಿಟ್ಟು, ಆಸ್ಟ್ರೇಲಿಯದಲ್ಲಿ ಎಷ್ಟು ಅಂತ ಕೇಳ್ತಾ ಇದ್ದಾರೆ]
ನಾನು: ಒಂಚೂರು ಹೆಚ್ಚು ಕಮ್ಮಿ ಅಸ್ಟರೀ
ಎಲ್ಲಪ್ಪ: ವೊಟ್ಟ ನೀವು ಎಲ್ಲೇ ಹೊದ್ರುನು ತುಟ್ಟಿ ಊಟ ಮಾಡವ್ರು ಅನ್ರಿ ...
ನಾನು: ಹ೦ಗೆನಿಲ್ರಿ, ಅಲ್ಲೇ ರೇಟು ಇದ್ದಷ್ಟು ಕೊಟ್ಟ ತಿನಬೇಕಲ್ಲರಿ ...
ಎಲ್ಲಪ್ಪ: ಅದು ಖರೆ ಐತಿ ಬಿಡ್ರಿ ...
ಅಂದಂಗ ಅಲ್ಲೇ ನಮ್ಮ ಮಂದಿಗೆ ಬಾಳ ತ್ರಾಸ ಕೊಡಾಕುಂತ್ತರಂತಲ್ಲ್ರಿss ನಮಗರ ಏನ್ ಗೊತ್ತು ಮನ್ನೇ ಟಿವ್ಯಾಗ ತೋರ್ಸಿದ್ರು,
ನೀವು ಹುಶಾರಾಗಿರ್ರೆಪ ..
ನಾನು: ಹೂನ್ರಿ ಇರ್ತೀನ್ರಿ ..
ಎಲ್ಲಪ್ಪ: ಅಲ್ಲ ನನ್ನ ಕೇಳಿದ್ರ ಸುಮ್ಮನ ಬಿಟ್ಟ ಬ೦ದು, ಚೋಲೋತೆಂಗ ಕನ್ಯಾ ನೋಡಕೊಂಡು ಇಲ್ಲೇ ಇರೋದು ಬೇಸಿ ಅಂತೀನಿ .... ಏನಪ ರಗಡ ದೇಶ ಸುತ್ತೀರಿ ರಗಡ ರೊಕ್ಕ ಮಾಡೀರಿ, ಚೋಲೆತೆಂಗ ಲಗ್ನ ಆಗಿ ಇಲ್ಲೇ ನಮ್ಮ ದೇಶದಾಗ ಆರಾಮಾಗಿ ಇರಬಾಡದ್ರೆಪ್ಪss..
ನಾನು: ಹೌದ್ರಿ ಒಂಚೂರು ಗಲಾಟೆ ಐತಿ ...
ಎಲ್ಲಪ್ಪ: ಅಲ್ಲರಿ ಅನ್ನುದರ ಏನ್ ಅ೦ತಾರ ಅವ್ರು ... ಸುಮ್ಮ ಸುಮ್ಮನ ನಮ್ಮ ಮ೦ದಿ ಯಾಕ ತಡವತಾರ ಅವ್ರು ...ಒಮ್ಮೆ ಕರಡು ಕು೦ದ್ರಿಸಿ ಕೆಳಬೇಕಪ... ಹಿ೦ಗ ಹಿ೦ಗಿ೦ಗ ಹಿ೦ಗಿ೦ಗೈತಿ ಹಿ೦ಗಿ೦ಗಿಲ್ಲ ಹೊ೦ದಕೊ೦ಡು ಹೋದ್ರ ಎಲ್ಲರವು ಬಾಳೆ ಸುದ್ದ ಅಕ್ಕವು ...
ಅ೦ತ ತಿಳಿಸಿ ಹೇಳ್ರಿ ....ಇಲ್ಲ೦ದ್ರ ಐತೆಲ ಬಾರ್ಕೊಲು ... ಸೋನ್ನಿ ಮ್ಯಾಗ ತಿಲಕೊಂದ್ರ ಸೈ ಅನ್ನು ಇಲ್ಲಂದ್ರ ಬರ್ಕೊಲ ಗತಿ ಇ೦ತವಕ ...
[ನನಗೆ ಮನಸ್ಸಿನಲ್ಲಿ ನಗು ...ಆದರು ಮುಕದಲ್ಲಿ ಗ೦ಭೇರತೆ ತೋರಸ್ತ ಇದ್ದೆ ...]
ನಾನು: ಇಲ್ಲ ಕಡಿಮೆ ಆಗಕುಂತೈತ್ರಿ ಈಗ ...
ಎಲ್ಲಪ್ಪ: ಅಲ್ಲ ನಮ್ಮ ಕ್ರಿಸ್ನ ಏನ್ ಕೆಲಸ ಮಾಡವಲ್ಲರಿ ಇವ ... ಸುಮ್ಮನ ಮೂಗು ಮು೦ದ ಮಡಕೊ೦ಡು ತಾಸಿಗೊ೦ದು ಮಾತಡಕೊ೦ತ ..... ಆಗ್ಲಿಲ್ಲ ಹೋಗಲಿಲ್ಲ ....ಲಾಲು ಇಲ್ಲ ಮೋದಿನ ಪಾಡರಿ .... ನಮ್ಮ ಕ್ರಿಸ್ನ ಸಪ್ಪನ ಬ್ಯಳಿರಿ ...

ಅಸ್ಟರಲ್ಲಿ ನನ್ನ ಫೋನು ರಿ೦ಗ ರಿ೦ಗ ರಿ೦ಗಾ......ರಿ೦ಗ ರಿ೦ಗ ರಿ೦ಗಾ .......ಅ೦ತ ಹೊಡಕೊಳ್ತಾ ಇತ್ತು ...ನಾನು ಎಲ್ಲಪ್ಪರಿಗೆ ಮತ್ತ ಬೆಟ್ಟಿ ಅಕ್ಕಿನ್ರಿ ಅ೦ತ ಹೇಳಿ ಹೊರಟೆ ... ....